ಆಲ್_ಹಾಲ್ ಅವರ ಆಶ್ರಮದಲ್ಲಿ ನಡೆದ ಘಟನೆ ಇದು. ಆಶ್ರಮದ ಮಧ್ಯೆ ಇದ್ದ ಎತ್ತರದ ಮರವೊಂದರ ಮೇಲೆ ಒಂದು ಬಿಳಿ ಧ್ವಜವಿತ್ತು. ಒಂದು ದಿನ ಗಾಳಿಗೆ ಧ್ವಜ ಜೋರಾಗಿ ಸದ್ದು ಮಾಡುತ್ತಿದ್ದಾಗ ಮರದ ಕೆಳಗೆ ನಿಂತಿದ್ದ ಇಬ್ಬರು ಶಿಷ್ಯರು ಧ್ವಜದ ಹಾರಾಟವನ್ನು ವಿಶ್ಲೇಷಿಸತೊಡಗಿದರು.
ಒಬ್ಬ ಹೇಳಿದ: ‘ಧ್ವಜ ಚಲಿಸುತ್ತಿದೆ. ಅಂದರೆ ಅದು ತನ್ನನ್ನು ಬಂಧಿಸಿಟ್ಟಿರುವ ಕಂಬದಿಂದ ವಿಮೋಚನೆ ಬಯಸುತ್ತಿದೆ’
ಎರಡನೆಯವನು ಇದನ್ನು ವಿರೋಧಿಸಿದ: ‘ಗಾಳಿ ಚಲಿಸುತ್ತಿದೆ. ಗಾಳಿ ಈಗಾಗಲೇ ಮುಕ್ತವಾಗಿರುವುದರಿಂದ ಧ್ವಜವನ್ನೂ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ.’
ಈ ಹೊತ್ತಿಗೆ ಸ್ನಾನ ಮುಗಿಸಿ ಬರುತ್ತಿದ್ದ ಹಿರಿಯ ಶಿಷ್ಯರೊಬ್ಬರು ಇವರ ವಿವಾದವನ್ನು ಪರಿಹರಿಸಲು ‘ಧ್ವಜವೂ ಚಲಿಸುತ್ತಿಲ್ಲ, ಗಾಳಿಯೂ ಚಲಿಸುತ್ತಿಲ್ಲ. ಚಲಿಸುತ್ತಿರುವುದು ನಿಮ್ಮ ಮನಸ್ಸು’ ಎಂದು ಚರ್ಚೆಗೆ ಅಧ್ಯಾತ್ಮದ ಆಯಾಮ ಕೊಟ್ಟರು.
ಈ ಹೇಳಿಕೆಯ ತಾತ್ವಿಕತೆಯನ್ನು ಮೂವರೂ ಚರ್ಚಿಸಲಾರಂಭಿಸುವ ಹೊತ್ತಿಗೆ ಟಾ_ರಸನ ಆಗಮನವಾಯಿತು. ಮೂವರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಅವನಲ್ಲಿ ಹೇಳಿದರು.
ಟಾ_ರಸ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: ‘ಚಲಿಸುತ್ತಿರುವುದು ನಿಮ್ಮ ಮೂವರ ನಾಲಿಗೆ. ಅದಕ್ಕೆ ಮಾತುಗಳಿಂದ ಮುಕ್ತಿ ಬೇಕಾಗಿದೆ’