ಗುರು ಆಲ್_ಹಾಲ್ ಅವರ ಆಶ್ರಮಕ್ಕೆ ಪಶ್ಚಿಮದ ಸಾಧಕನೊಬ್ಬನ ಆಗಮನವಾಯಿತು. ಇವನು ಈವರೆಗೂ ಬಂದಿದ್ದ ಪಶ್ಚಿಮದ ಸಾಧಕರೆಲ್ಲರಿಗಿಂತ ಭಿನ್ನನಾಗಿದ್ದ. ತನ್ನ ಸಾಧನೆಗಳ ಬಗ್ಗೆ ಆತ ಏನನ್ನೂ ಹೇಳಲಿಲ್ಲ. ಬದಲಿಗೆ ಆ ಸಾಧನೆಗಳು ಅಷ್ಟೇನೂ ಮುಖ್ಯವಲ್ಲ. ಅದಕ್ಕಾಗಿಯೇ ನಾನು ಆಲ್_ಹಾಲ್ ಅವರ ಮಾರ್ಗದರ್ಶನದಲ್ಲಿ ಕಲಿಯಲು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.
ಬಂದ ದಿನ ಅವನಿಗೆ ಗುರುಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮರು ದಿನ ಸಂಜೆಯ ಧ್ಯಾನದ ವೇಳೆ ಗುರುಗಳು ಅವನನ್ನು ಬರಲು ಹೇಳಿಕಳುಹಿಸಿದರು. ಆತ ಗುರುಗಳೆದುರು ನಿಂತು ತಾನು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. ಗುರು ಆಲ್_ಹಾಲ್ `ನಿನ್ನ ಈವರೆಗಿನ ಕಲಿಕೆಯ ಬಗ್ಗೆ ಹೇಳು’ ಎಂದರು.
ಆ ಪಶ್ಚಿಮದ ಸಾಧಕ ತಾನು ಕಲಿತ ಧರ್ಮ ಗ್ರಂಥದ ಸಾಲುಗಳನ್ನು ಪಠಿಸುತ್ತಾ ಹೋದ.
ಇದನ್ನು ಕೇಳಿದ ಆಲ್_ಹಾಲ್ ಕೋಪದಿಂದ `ಮೂರ್ಖ ನೀನು ಈವರೆಗೆ ಬರೇ ನೆನಪಿಡುವುದನ್ನು ಮಾತ್ರ ಕಲಿತದ್ದೇ?’ ಎಂದು ಪ್ರಶ್ನಿಸಿದ.
ಪಶ್ಚಿಮದ ಸಾಧಕನಿಗೆ `ಟೌತ್ವ’ದ ರಹಸ್ಯ ತಿಳಿಯಿತು.









