ವಿಕಾಸವಾದ

ಗುರು ಆಲ್_ಹಾಲ್ ಅವರ ಆಶ್ರಮದಲ್ಲಿ ಒಂದು ಬೆಕ್ಕು ಇತ್ತು. ಇದರೆದುರು ಏನನ್ನು ಕುಡಿಯಲು ಇಟ್ಟರೂ ಅದು ಪಾತ್ರೆಯನ್ನು ಉರುಳಿಸಿ ಪಾತ್ರೆಯೊಳಗಿರುವುದನ್ನು ನೆಲಕ್ಕೆ ಚೆಲ್ಲಿ ಆಮೇಲೆ ಅದನ್ನು ನೆಕ್ಕುತ್ತಿತ್ತು. ಇದನ್ನು ಕಂಡ ಶಿಷ್ಯರೆಲ್ಲರೂ ಅದನ್ನೊಂದು ದಡ್ಡ ಬೆಕ್ಕು ಎಂದು ತೀರ್ಮಾನಿಸಿಬಿಟ್ಟಿದ್ದರು.

ಒಂದು ದಿನ ಆಲ್_ಹಾಲ್ ಅವರು ವಿಕಾಸವಾದದ ಬಗ್ಗೆ ಹೇಳುತ್ತ ಆಶ್ರಮದಲ್ಲಿರುವ ಬೆಕ್ಕು ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದುಬಿಟ್ಟರು. ಶಿಷ್ಯರೆಲ್ಲಾ ಗಾಬರಿಯಾಗಿ ಈ ಬೆಕ್ಕು ವಿಕಾಸದ ಹಾದಿಯಲ್ಲಿ ಹಿಂದಕ್ಕೆ ಚಲಿಸಿರಬೇಕು ಎಂದು ಭಾವಿಸಿ “ವಿಕಾಸ ಎಂದರೆ ಹಿಂದಕ್ಕೆ ಚಲಿಸುವುದೇ ಎಂದು ಪ್ರಶ್ನಿಸಿದರು.”

ಗುರುಗಳಿಗೆ ಶಿಷ್ಯರ ಮನದಿಂಗಿತ ಅರ್ಥವಾಗಿ “ಬೆಕ್ಕು ಹಿಂದಕ್ಕೆ ಚಲಿಸಿಲ್ಲ. ಅದು ಮುಂದಕ್ಕೇ ಚಲಿಸಿದೆ. ಈ ಬೆಕ್ಕಿನ ಪೂರ್ವಜನಾದ ಬೆಕ್ಕೊಂದು ಭಾರತ ದೇಶದ ಸಾಮ್ರಾಟನಲ್ಲಿ ಒಬ್ಬನಾದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವಿದೂಷಕ ತೆನಾಲಿ ರಾಮನ ಮನೆಯಲ್ಲಿದ್ದ. ಅಲ್ಲಿ ಒಮ್ಮೆ ಬಿಸಿ ಹಾಲು ಕುಡಿದು ಗಂಟಲು ಸುಟ್ಟುಕೊಂಡ ಮೇಲೆ ಅವನ ಮುಂದಿನ ತಲೆಮಾರು ಗಂಟಲು ಸುಟ್ಟುಕೊಳ್ಳಗೇ ದ್ರವಾಹಾರವನ್ನು ತೆಗೆದುಕೊಳ್ಳುವ ವಿಧಾನವನ್ನು ಆವಿಷ್ಕರಿಸಿತು.” ಎಂದರು.

Post a Comment

Your email is never published nor shared. Required fields are marked *
*
*