Category Archives: ಆಲ್_ಹಾಲ್ ನ ಕಥೆಗಳು

ದೇವರ ಜತೆಗಿನ ಜಗಳ

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.
ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.
ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’
ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  [...]

ವಿಕಾಸವಾದ

ಗುರು ಆಲ್_ಹಾಲ್ ಅವರ ಆಶ್ರಮದಲ್ಲಿ ಒಂದು ಬೆಕ್ಕು ಇತ್ತು. ಇದರೆದುರು ಏನನ್ನು ಕುಡಿಯಲು ಇಟ್ಟರೂ ಅದು ಪಾತ್ರೆಯನ್ನು ಉರುಳಿಸಿ ಪಾತ್ರೆಯೊಳಗಿರುವುದನ್ನು ನೆಲಕ್ಕೆ ಚೆಲ್ಲಿ ಆಮೇಲೆ ಅದನ್ನು ನೆಕ್ಕುತ್ತಿತ್ತು. ಇದನ್ನು ಕಂಡ ಶಿಷ್ಯರೆಲ್ಲರೂ ಅದನ್ನೊಂದು ದಡ್ಡ ಬೆಕ್ಕು ಎಂದು ತೀರ್ಮಾನಿಸಿಬಿಟ್ಟಿದ್ದರು.
ಒಂದು ದಿನ ಆಲ್_ಹಾಲ್ ಅವರು ವಿಕಾಸವಾದದ ಬಗ್ಗೆ ಹೇಳುತ್ತ ಆಶ್ರಮದಲ್ಲಿರುವ ಬೆಕ್ಕು ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದುಬಿಟ್ಟರು. ಶಿಷ್ಯರೆಲ್ಲಾ ಗಾಬರಿಯಾಗಿ ಈ ಬೆಕ್ಕು ವಿಕಾಸದ ಹಾದಿಯಲ್ಲಿ ಹಿಂದಕ್ಕೆ ಚಲಿಸಿರಬೇಕು ಎಂದು ಭಾವಿಸಿ [...]

ಈಶಾಸಸ್ವ ಬೋಧಿಸಿದ ಜ್ಞಾನ

ಅದು ಗುರು ಆಲ್‌_ಹಾಲ್‌ ಜ್ಞಾನಾನ್ವೇಷಣೆಯಲ್ಲಿ ಸಂಚಾರ ನಡೆಸುತ್ತಿದ್ದ ಕಾಲಘಟ್ಟ. ಈ ಸಂಚಾರದ ವೇಳೆ ಅವರು ಭಾರತಕ್ಕೆ ಬಂದರು. ಆ ಕಾಲದಲ್ಲಿ ಭಾರತದಲ್ಲಿದ್ದ ಈಶಾಸತ್ವ ಎಂಬ ಮಹಾ ಜ್ಞಾನಿಯೊಬ್ಬಳ ಬಳಿಗೆ ಆಲ್‌_ಹಾಲ್‌ ಮಾರ್ಗದರ್ಶನ ಪಡೆಯಲು ಹೋದರು.

ತುಂಬಿದ ಬುರುಡೆ

ಗುರು ಆಲ್‌_ಹಾಲ್‌ರ ಬಳಿ ಉಪದೇಶ ಮತ್ತು ಶಿಷ್ಯತ್ವ ಯಾಚಿಸಿ ಬರುವವರ ಸಂಖ್ಯೆ ಬಹಳ ದೊಡ್ಡದಿತ್ತು. ಈ ಸಂಖ್ಯೆಯಿಂದ ಅವರೇನೂ ವಿಚಲಿತರಾಗಿರಲಿಲ್ಲ. ನಿಜವಾದ ವಿದ್ಯಾರ್ಥಿಯನ್ನು ಆರಿಸುವ ಕಲೆ ಅವರಿಗೆ ಗೊತ್ತಿತ್ತು. ಅವರ ಆಯ್ಕೆಯ ವಿಧಾನಕ್ಕೆ ಸಂಬಂಧಿಸಿದ ಒಂದು ಕತೆ ಇಲ್ಲಿದೆ.
ಒಮ್ಮೆ ದೂರ ದೇಶದಿಂದ ಒಬ್ಬ ವಿದ್ವಾಂಸ ಆಲ್‌_ಹಾಲ್‌ ಆಶ್ರಮಕ್ಕೆ ಬಂದ. ಆತನ ಉದ್ದೇಶ ಸರಳವಾಗಿತ್ತು. ಆಲ್‌_ಹಾಲ್‌ ಅವರ ಶಿಷ್ಯ ವೃತ್ತಿ ಮಾಡಿ `ಟೌತ್ವ’ ಗಳಿಸುವುದು. ಆಲ್‌_ಹಾಲ್‌ರ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಪರೀಕ್ಷೆಗೆ ಸಿದ್ಧನಾಗಿದ್ದ.
ಆಲ್‌_ಹಾಲ್‌ ಈತನನ್ನು ಕರೆದು [...]

ನೆನಪಿಡುವ ಯಂತ್ರ

ಗುರು ಆಲ್‌_ಹಾಲ್‌ ಅವರ ಆಶ್ರಮಕ್ಕೆ ಪಶ್ಚಿಮದ ಸಾಧಕನೊಬ್ಬನ ಆಗಮನವಾಯಿತು. ಇವನು ಈವರೆಗೂ ಬಂದಿದ್ದ ಪಶ್ಚಿಮದ ಸಾಧಕರೆಲ್ಲರಿಗಿಂತ ಭಿನ್ನನಾಗಿದ್ದ. ತನ್ನ ಸಾಧನೆಗಳ ಬಗ್ಗೆ ಆತ ಏನನ್ನೂ ಹೇಳಲಿಲ್ಲ. ಬದಲಿಗೆ ಆ ಸಾಧನೆಗಳು ಅಷ್ಟೇನೂ ಮುಖ್ಯವಲ್ಲ. ಅದಕ್ಕಾಗಿಯೇ ನಾನು ಆಲ್‌_ಹಾಲ್‌ ಅವರ ಮಾರ್ಗದರ್ಶನದಲ್ಲಿ ಕಲಿಯಲು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.
ಬಂದ ದಿನ ಅವನಿಗೆ ಗುರುಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮರು ದಿನ ಸಂಜೆಯ ಧ್ಯಾನದ ವೇಳೆ ಗುರುಗಳು ಅವನನ್ನು ಬರಲು ಹೇಳಿಕಳುಹಿಸಿದರು. ಆತ ಗುರುಗಳೆದುರು ನಿಂತು ತಾನು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. [...]

ರೂಪಕದ ಅರ್ಥ

ಟಾ_ರಸ ರೂಪಕಗಳಲ್ಲಿ ಉತ್ತರ ಕೊಡುವುದರಲ್ಲಿ ಪ್ರವೀಣ. ಅವನಿಗೆ ಎದುರಾಗುವ ಎಲ್ಲಾ ಪ್ರಶ್ನೆಗಳನ್ನೂ ಅವು ವಿಶಿಷ್ಟವಾಗಿ ಗ್ರಹಿಸಿ ರೂಪಕಗಳಲ್ಲಿ ಉತ್ತರಿಸುತ್ತಿದ್ದುದರಿಂದ ಅನೇಕರಿಗೆ ಅವು ಅರ್ಥವಾಗುತ್ತಿರಲಿಲ್ಲ. ವರ್ತಮಾನದಲ್ಲೂ ಟಾ_ರಸನ ಕತೆಗಳನ್ನು ಕೇಳುವ, ಓದುವ ಅನೇಕರು ಕತೆಗಳು ಅರ್ಥವಾಗಲಿಲ್ಲ ಎಂದು ತಿಣುಕಾಡುತ್ತಾರೆ.
ಟಾ_ರಸನ ಗುರುಗಳಾದ ಆಲ್‌_ಹಾಲ್‌ರ ಶಿಷ್ಯರಿಗೂ ಇದೇ ಸಮಸ್ಯೆ ಕಾಡಿ ಅವರು ಗುರುಗಳ ಬಳಿಗೆ ಹೋದರು. `ತಾವೇನೋ ಟಾ_ರಸನ ಉತ್ತರಗಳು, ಸಾಮಿತಿಗಳು, ದೃಷ್ಟಾಂತಗಳನ್ನು ಹೊಗಳುತ್ತೀರಿ. ಆತ ಯಾವತ್ತೂ ಅವುಗಳ ಅರ್ಥವನ್ನು ವಿವರಿಸಲೇ ಇಲ್ಲ’ ಎಂದರು.
ಇದನ್ನು ಕೇಳಿ ನಕ್ಕ ಆಲ್‌_ಹಾಲ್‌ `ನಿಮಗೆ ತಿನ್ನಲೆಂದು [...]

ಯಾವ ಇತರರು?

ಆಲ್‌_ಹಾಲ್‌ ಅವರ ಬಳಿಗೆ ಉಪದೇಶ ನಿರೀಕ್ಷಿಸಿ ಹಲವರು ಬರುತ್ತಿದ್ದರು. ಇವರಲ್ಲಿ ಎಲ್ಲ ವರ್ಗದ ಜನರೂ ಇದ್ದರು. ಒಮ್ಮೆ ದೂರದ ಓಯಸಿಸ್‌ನಿಂದ ಒಬ್ಬ ಶ್ರೀಮಂತ ಬಂದ. ಆಶ್ರಮದಲ್ಲಿ  ಆತಿಥ್ಯ ಸ್ವೀಕರಿಸಿದ ನಂತರ ಆಲ್‌_ಹಾಲ್‌ರ ಬಳಿಗೆ ಹೋಗಿ ತನ್ನನ್ನು ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟು ಅನುಗ್ರಹಿಸಬೇಕು ಎಂದು ಬೇಡಿಕೊಂಡ.
ಆಲ್‌_ಹಾಲ್‌ ಪ್ರಶ್ನೆ ಏನೆಂದು ಕೇಳಿದರು.
ಆತ ಹೇಳಿದ: `ನನ್ನಲ್ಲಿ ಸಾಕಷ್ಟು ಧನ, ಕನಕ, ಆಸ್ತಿಯಿದೆ. ಇದನ್ನು ಇತರರಿಗೆ ಕೊಟ್ಟು ಸಹಾಯ ಮಾಡುವುದು ಹೇಗೆ?
ಆಲ್‌_ಹಾಲ್‌ ಮರುಪ್ರಶ್ನೆ ಹಾಕಿದರು: `ಯಾವ ಇತರರು?’

ಕಳ್ಳ, ಕಳವು

ಆಲ್‌_ಹಾಲ್‌ನ ಶಿಷ್ಯನಾಗಿದ್ದ ಕಾಲದಲ್ಲಿ ಟಾ_ರಸನ ಮೇಲೆ ಹಲವು ಕಳವಿನ ಆರೋಪಗಳಿದ್ದವು. ಆಲ್‌_ಹಾಲ್‌ನ ಉಳಿದ ಶಿಷ್ಯರು ಸದಾ ಟಾ_ರಸ ಇಂದು ಏನನ್ನು ಕದ್ದ ಎಂದು ಹೋಗಿ ಗುರುಗಳಿಗೆ ವರದಿ ಒಪ್ಪಿಸುವುದು ನಡೆದೇ ಇತ್ತು.

‘ಟೌತ್ವ’ ಎಂದರೆ…?

ಆಲ್‌_ಹಾಲ್‌ ತಮ್ಮ ಸಮಕಾಲೀನರ ನಡುವೆ ಮಹಾ ಗುರು ಎಂಬ ಬಿರುದಿಗೆ ಪಾತ್ರರಾದವರು. ಅವರಲ್ಲಿದ್ದ `ಗುರುತ್ವ’ವನ್ನು ಮೀರಿಸುವ ಯಾರೂ ಅವರ ಕಾಲದಲ್ಲಿ ಇರಲಿಲ್ಲ. ಇದನ್ನು ಸುಳ್ಳು ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದ ಒಬ್ಬ `ಜ್ಞಾನಿ ಸಂತ’ ಅವರ ಜತೆ ಸಂವಾದ ಆರಂಭಿಸಿದ.

ಮನುಷ್ಯನ ಸ್ವರೂಪ

ಆಲ್‌_ಹಾಲ್‌ರ ಬಳಿಗೆ ಬಂದ ಆರು ಮಂದಿ ದೊಡ್ಡ ವಿದ್ವಾಂಸರ ಗುಂಪೊಂದು ಬಹಳ ಹೊತ್ತು ಏನೇನೋ ಚರ್ಚಿಸಿತು. ಚರ್ಚೆಯ ಹೊತ್ತು ಮತ್ತು ಗಾಂಭೀರ್ಯವನ್ನು ದೂರದಿಂದಲೇ ಗಮನಿಸಿದ್ದ ಟಾ_ರಸ ವಿದ್ವಾಂಸರೆಲ್ಲಾ ಹೋದ ನಂತರ ಗುರುಗಳಲ್ಲಿ ಕೇಳಿದ `ಅವರೇನು ಚರ್ಚಿಸುತ್ತಿದ್ದರು?’